ವಿಜಯಪುರ : ಜಿಲ್ಲೆಯ ಆಲಮೇಲ್ ಪೊಲೀಸ್ ಠಾಣೆ ಗುನ್ನಾ ನಂ: 35/2002 ಕಲಂ: 302, 201 ಐಪಿಸಿ (ಎಸ್ಸಿ ನಂ: 102/2002) ಪ್ರಕರಣದಲ್ಲಿ ದಿನಾಂಕ: 20.11.2003 ರಂದು ಪ್ರಕರಣದ ಆರೋಪಿ ಆಜಾನ್ ಹುಸೇನ್ ಮುಜಾವರ @ ಶೇಖ, ಸಾ: ವಾಗೋಲಿ ತಾ: ಮೋಹೊಳ ಜಿಲ್ಲಾ: ಸೊಲ್ಹಾಪೂರ ಮಹಾರಾಷ್ಟ್ರ, ಈತನಿಗೆ ಮಾನ್ಯ ಪ್ರಧಾನ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ, ತೀರ್ಪು ನೀಡಿದ್ದು , ಸದರಿ ಆರೋಪಿತನು ಮಾನ್ಯ ನ್ಯಾಯಾಂಗ ಬಂಧನದಲ್ಲಿದ್ದಾಗ, ವಿಜಯಪುರ ಕೇಂದ್ರ ಕಾರಾಗೃಹದಿಂದ ದಿನಾಂಕ: 25.03.2005 ರಂದು 10 ದಿನಗಳ ಪೆರೋಲ್ ರಜೆ ಪಡೆದು, ತನ್ನ ಊರಿಗೆ ಹೋಗಿದ್ದು, ಪೆರೋಲ್ ರಜೆ ಅವಧಿ ಮುಗಿದ ಮೇಲೆ ಮರಳಿ ಹಾಜರಾಗದೇ, ತಲೆಮರೆಸಿಕೊಂಡು ಹೋಗಿರುತ್ತಾನೆ . ಈ ಬಗ್ಗೆ ಮಹಾರಾಷ್ಟ್ರ ರಾಜ್ಯದ ಸೊಲ್ಹಾಪೂರ ಜಿಲ್ಲೆಯ ಕಾಮತಿ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: 26/2014 ಕಲಂ: 224, 225 ಐಪಿಸಿ ಅಡಿಯಲ್ಲಿ ಪ್ರಕರಣದ ದಾಖಲಾಗಿರುತ್ತದೆ.ಕಳೆದ 21 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಶಿಕ್ಷಾಬಂಧಿ ಆರೋಪಿತನ ಪತ್ತೆ ಕುರಿತು ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಮತ್ತು ರಾಮನಗೌಡ ಹಟ್ಟಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ವಿಜಯಪುರ ರವರ ಮಾರ್ಗದರ್ಶನದಲ್ಲಿ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಶ್ರೀ ರವಿ ಯಡವನ್ನವರ, ಪಿ.ಐ, ಶ್ರೀ ರಾಕೇಶ ಬಗಲಿ, ಪಿ.ಎಸ್.ಐ ಹಾಗೂ ಸಿಬ್ಬಂದಿಗಳ ಒಳಗೊಂಡ ವಿಶೇಷ ತನಿಖಾ ತಂಡ ರಚಿಸಿ , ಸದರಿ ವಿಶೇಷ ತಂಡವು ಆರೋಪಿತನ ಇರುವಿಕೆಯ ಬಗ್ಗೆ ಮಾಹಿತಿ ಕಲೆ ಹಾಕಿ, ದಿನಾಂಕ: 11.04.2026 ರಂದು ಮಹಾರಾಷ್ಟ್ರ ರಾಜ್ಯದ ಇಚಲಕರಂಜಿ ಪಟ್ಟಣದಲ್ಲಿ ವಶಕ್ಕೆ ಪಡೆದು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, ಮರಳಿ ಕೇಂದ್ರ ಕಾರಾಗೃಹಕ್ಕೆ ಒಪ್ಪಿಸಿದ್ದಾರೆ.ಸದರಿ ಶಿಕ್ಷಾಬಂಧಿ ಆರೋಪಿತನ ಕುರಿತು ಮಾಹಿತಿ ಸಂಗ್ರಹಿಸಿ, ಆತನನ್ನು ಪತ್ತೆ ಹಚ್ಚಿ, ಬಂಧಿಸುವಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ವಿಜಯಪುರ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ಜನರ ಕರ್ತವ್ಯವನ್ನು ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಶ್ಲಾಘಿಸಿದ್ದಾರೆ…