
ನಗರದ ಬೌದ್ಧ ವಿಹಾರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಗವಾನ್ ಬುದ್ಧ ಜಯಂತಿ ಆಚರಿಸಲಾಯಿತು. ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಔದ್ರಾಮ ಅವರು ಮಾತನಾಡಿ. ಬುದ್ಧನು ಜಗತ್ತಿಗೆ ಜ್ಞಾನದ ಬೆಳಕು ನೀಡುವ ಮೂಲಕ ಸಂದೇಶ ಸಾರಿದ್ದಾರೆ ಎಂದು ಹೇಳಿದರು. ಇನ್ನೂ ವಿಶೇಷವಾಗಿ ಉಪನ್ಯಾಸಕರಾಗಿ ಆಗಮಿಸಿದ ಸುಜಾತಾ ಚಲವಾದಿ ಅವರು ಮಾತನಾಡಿ ಬುದ್ಧನು ಕೇವಲ ಭಾರತಕ್ಕೆ ಅಷ್ಟೇ ಅಲ್ಲ ಇಡೀ ವಿಶ್ವಕ್ಕೆ ವಿಶ್ವಗುರುವಾಗಿ ಹೊಮ್ಮಿದ್ದಾರೆ , ಅವರ ತತ್ವ ಸಿದ್ಧಾಂತಗಳ ಮೂಲಕ ಮನಕುಲ ಸಾಗಬೇಕಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಬೌದ್ಧ ವಿಹಾರ್ ಸಮಿತಿ ಅಧ್ಯಕ್ಷರಾದ ರಾಜಶೇಖರ್ ಎಡಳ್ಳಿ ಅವರು ಸೇರಿದಂತೆ ಉಪಾಸಕ ಉಪಾಸಕಿಯರು ಉಪಸ್ಥಿತರಿದ್ದರು…
